Slide
Slide
Slide
previous arrow
next arrow

ಆ.4ಕ್ಕೆ ಬಕ್ಕಳದಲ್ಲಿ ‘ನಾದಪೂಜೆ’ ಕಾರ್ಯಕ್ರಮ

300x250 AD

ಶಿರಸಿ: ಸ್ವರ ಸಂವದನಾ ಪ್ರತಿಷ್ಠಾನ ಗಿಳಿಗುಂಡಿ ವತಿಯಿಂದ ಆ.4 ಶುಕ್ರವಾರ, ಸಂಕಷ್ಠಿ ಪ್ರಯುಕ್ತ ‘ನಾದಪೂಜೆ’ ಸಂಗೀತ ಕಾರ್ಯಕ್ರಮವನ್ನು ತಾಲೂಕಿನ ಬಕ್ಕಳದ ಸತ್ಯನಾಥೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಪಂ. ಶ್ರೀಪಾದ್ ಹೆಗಡೆ ಕಂಪ್ಲಿ, ವಿನಯ್ ಹೆಗಡೆ ತೋಟದಹಳ್ಳಿ, ಮನು ಹೆಗಡೆ ಪುಟ್ಟನಮನೆ ಗಾಯನದಲ್ಲಿ ಹಾಗೂ ಸಾರಂಗಿಯಲ್ಲಿ ಗುರುಪ್ರಸಾದ ಹೆಗಡೆ ಗಿಳಿಗುಂಡಿ ಕಾಣಿಸಿಕೊಳ್ಳಲಿದ್ದಾರೆ. ಸಹ ಕಲಾವಿದರಾಗಿ ತಬಲಾದಲ್ಲಿ ಪಂ.ಗೋಪಾಲಕೃಷ್ಣ ಕಲಭಾಗ್, ಮಹೇಶ ಹೆಗಡೆ ಹೊಸಗದ್ದೆ, ವಿಜಯೇಂದ್ರ ಹೆಗಡೆ ಅಜ್ಜಿಬಳ, ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಹೆಬ್ಬಲಸು, ದಿನೇಶ ಹೆಗಡೆ ಗಿಳಿಗುಂಡಿ ಸಾಥ್ ನೀಡಲಿದ್ದು, ಕಾರ್ಯಕ್ರಮಕ್ಕೆ ಸರ್ವ ಭಕ್ತಾದಿಗಳು, ಕಲಾಸಕ್ತರು ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top